logo

ಚಿಕ್ಕೋಡಿ. ಅಬ್ಬಬ್ಬಾ ಏನು ಬಿಸಿಲು, ಚಿಕ್ಕೋಡಿ ಉಪವಿಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ಜಾನವಾರುಗಳು ತತ್ತರಿಸಿ ಹೋಗಿವೆ, ಸುಮಾರು 40* ಕ್ಕೂ ಮ

ಚಿಕ್ಕೋಡಿ. ಅಬ್ಬಬ್ಬಾ ಏನು ಬಿಸಿಲು, ಚಿಕ್ಕೋಡಿ ಉಪವಿಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ಜಾನವಾರುಗಳು ತತ್ತರಿಸಿ ಹೋಗಿವೆ, ಸುಮಾರು 40* ಕ್ಕೂ ಮೀರಿ ತಾಪಮಾನ ದಾಖಲಾಗುತ್ತಿದೆ, ಮಳೆಯ ಸುಳಿವೂ ಸಹ ಇತ್ತ ಕಡೆಗೆ ಇಲ್ಲ,
ಇಂತಹ ಪರಿಸ್ಥಿತಿಯಲ್ಲಿ ನಿಪ್ಪಾಣಿ ತಾಲೂಕಿನ, ಮಾಂಗೂರ ಗ್ರಾಮದ ರೈತರಾದ ಸ್ವಪ್ನಿಲ ಮತ್ತು ಸಂತೋಷ ಮಾನಕಾಪುರೆ ಇವರು, ದನ-ಕರಗಳ ಹಿತದೃಷ್ಟಿಯಿಂದ ಗೊಟಗಿಯಲ್ಲಿ ತಂಪಾದ ಶಾವರ ನಿರ್ಮಿಸಿ, ದನ-ಕರಗಳ ಮೇಲೆ ಹನಿ ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ, ಈ ಶಾವರ ವ್ಯವಸ್ಥೆಯನ್ನು ನೋಡಲು ಬಹಳಷ್ಷು ಜನರು ಭೆಟ್ಟಿ ನೀಡಿ ಮಾನಕಾಪುರೆ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ, ಮನುಷ್ಯ ತನಗಾಗಿ ಪಂಕಾ ಕೂಲರ ಏಸಿ ಅಂತಹ ತಂತ್ರಜ್ಞಾನಗಳನ್ನು ಬಳಸುತ್ತದೆ, ದನ-ಕರಗಳಿಗಾಗಿ ಶಾವರ ಬಳಸುತ್ತಿರುವ ಈ ರೈತರ ಕಾರ್ಯವನ್ನು ಆ ಭಗವಂತ ಮೆಚ್ಚಲೇ ಬೇಕೆಂದು, ಚಿಕ್ಕೋಡಿ ಪಟ್ಟಣದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಇವರು ಹಾರೈಸಿದ್ದಾರೆ.

8
1820 views